"ನುಡಿದರೆ ಮುತ್ತಿನ ಹಾರದಂತಿರಬೇಕು" ಎಂದರು- 12 ನೇ ಶತಮಾನದ ಶ್ರೇಷ್ಥ ದಾರ್ಶನಿಕ, ಸಮಾಜ ಸುಧಾರಕ, ಕವಿ, ರಾಜನೀತಿಜ್ಞ - ಬಸವಣ್ಣನವರು,
"ಬಸವ ಜಯಂತಿಯ ಶುಭಾಶಯಗಳು"
"Your Words Should be like Pearls" said Basavanna- A great 12th Century philosopher, social reformer, poet and statesman,
"Happy Basava Jayanti"
0 notes
'ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ತನ್ನ ಬಳಗವೆಲ್ಲವ'
ಬಿಳಿಮಲೆಯವರ ಆತ್ಮೀಯ ಸ್ನೇಹಬಳಗದ ಹರಹು ವಿಶ್ವ ವ್ಯಾಪಿಯಾದ್ದು, ನಮ್ಮೆಲ್ಲರಿಗೂ ಮಾರ್ಗದರ್ಶಿ ಗೆಳೆಯನಂತಿರುವ ಡಾ.ಪುರುಷೋತ್ತಮ ಬಿಳಿಮಲೆಯವರಿಗೆ ಜನುಮದಿನದ ಶುಭಹಾರೈಕೆಗಳು – ಗಿರಿಧರ ಕಾರ್ಕಳ, ತಪ್ಪದೆ ಮುಂದೆ ಓದಿ…
ಇದು ಬಸವಣ್ಣ ಕಂಡರಿಸಿದ ಕಾಕದರ್ಶನ..
ಆದರೆ, ಬಿಳಿಮಲೆಯವರ ಬದುಕಿನಲ್ಲಿ ಮಾತ್ರ ಕಾಗೆಯದು ಅಪಶಕುನದ ಪಾತ್ರ !! ಅವರು ಅದನ್ನೆಲ್ಲ ಮೀರಿ ನಿಂತು,ತಮ್ಮ ಪ್ರೀತಿ,ವಾತ್ಸಲ್ಯ, ಸಮೃದ್ಧ ಜೀವನಾನುಭವದ ಹಿನ್ನೆಲೆಯ ಚಿಕಿತ್ಸಕ ನೋಟದ, ಚಿಂತನೆಗಳ ಪನ್ನೀರ ಧಾರೆಯನ್ನು ಬಿಳಿಮಲೆಯ ಕಗ್ಗಾಡಿನ…
0 notes
0 notes
ಬಸವಣ್ಣನವರ ವಚನಗಳು
2 notes
·
View notes
ಈ ಯೋಜನೆ ಬಡ ಹಾಗೂ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಸಹಕಾರಿಯಾಗುತ್ತದೆ..
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಇಂಡಿಯನ್ ಗ್ಯಾಸ್ ಕಚೇರಿ ಸಮೀಪದಲ್ಲಿ ನೂತನವಾಗಿ ಆರಂಭವಾದ ಎಸ್.ಆರ್.ಎಸ್. ಡಿಜಿಟಲ್ ಸೇವಾಕೇಂದ್ರವನ್ನು ಉದ್ಘಾಟಿಸಲಾಯಿತು. ಒಂದೇ ಸೂರಿನಲ್ಲಿ ನೂರೆಂಟು ಸೇವೆಗಳನ್ನು ಪಡೆದುಕೊಳ್ಳವ ಸಿ.ಎಸ್.ಸಿ ಕೇಂದ್ರಗಳು ಬಡ ಹಾಗೂ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಸಹಕಾರಿಯಾಗಲಿದೆ....
ಸರಕಾರದ ಯೋಜನೆಗಳು ಪಾರದರ್ಶಕವಾಗಿ ಜನರಿಗೆ ತಲುಪಲು ಡಿಜಿಟಲ್ ತಂತ್ರಜ್ಞಾನ ಸಹಕಾರಿಯಾಗಿದೆ. ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರಕಾರದ ಸೇವೆಗಳ ಸೌಲಭ್ಯವನ್ನು ಪಡೆದುಕೊಳ್ಳುವ ಅನಿವಾರ್ಯತೆ ಇರುವುದರಿಂದ ಜನರಿಗೆ ನೇರವಾಗಿ ಸೌಲಭ್ಯಗಳು ನೀಡುವ ಸಿ.ಎಸ್.ಸಿ ಕೇಂದ್ರಗಳು ಬಹಳಷ್ಟು ಅನುಕೂಲಕರವಾಗಿದ್ದು
ಈ ನಿಟ್ಟಿನಲ್ಲಿ ಸಾಮಾನ್ಯ ಸೇವಾಕೇಂದ್ರ ಆರಂಭಿಸಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ. ಮುಖ್ಯವಾಗಿ ತಾಲೂಕಿನ ಜನರಿಗೆ ಎಸ್.ಆರ್.ಎಸ್ ಡಿಜಿಟಲ್ ಸೇವಾಕೇಂದ್ರ ಉತ್ತಮ ಸೇವೆಯನ್ನು ನೀಡಿ ಬಡ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಿವಿಧ ಸೇವೆಗಳಾದ ಪಾನ್ ಕಾರ್ಡ್, ಪಹಣಿ, ಆಯುಷ್ಮಾನ್ ಭಾರತ್, ಆರೋಗ್ಯ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ಹೊಸರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸ್ಕಾಲರ್ ಶಿಪ್, ಪಿಂಚಣಿ ಯೋಜನೆ, ಹಿರಿಯ ನಾಗರೀಕರ ಗುರುತಿನ ಚೀಟಿ, ಪಾಸ್ಪೋರ್ಟ್ ಸೇರಿದಂತೆ ೬೪ ಸರಕಾರಿ ಇಲಾಖೆಯ ಸೇವೆಗಳು ಎಸ್.ಆರ್.ಎಸ್. ಡಿಜಿಟಲ್ ಸೇವಾ ಕೇಂದ್ರದಲ್ಲಿ ಲಭ್ಯವಿದ್ದು ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದಾಗಿದೆ.
ಇನ್ನು ಡಿಜಿಟಲ್ ಸೇವಾಕೇಂದ್ರದ ಉದ್ಘಾಟನೆಗೆ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ, ಶ್ರೀ ಶಿವನಂದಾಶ್ರಮದ ಶ್ರೀ ರಾಮೇಶ್ವರಾನಂದ ಸ್ವಾಮೀಜಿ, ಎನ್.ಡಿ.ಎ ಮಾಜಿ ಅಧ್ಯಕ್ಷ ಹೇಮಂತ್ಕುಮಾರ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ ರಂಗನಾಥ್,
ಜಿಲ್ಲಾ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸದಸ್ಯ ಆರ್.ಕೊಟ್ರೇಶ್, ಪೌರಾಯುಕ್ತ ಮಂಜುನಾಥ ಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀನಾರಾಯಣ್, ಸಬ್ಇನ್ಸ್ಪೆಕ್ಟರ್ ಡಿ.ಆರ್ ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಿದ್ದು ವಿಶೇಷವಾಗಿತ್ತು.
Read the full article
1 note
·
View note
ಬಸವ ವಚನ ವಾಚನ : ಬಸವಣ್ಣನವರ ವಚನಗಳ ಪ್ರಸ್ತುತಿ
1105ನೇ ಇಸವಿಯ ವೈಶಾಖ ಶುದ್ಧ ತದಿಗೆ (ಅಕ್ಷಯ ತೃತೀಯ)ಯಂದು ಬಸವಣ್ಣನವರು ಜನಿಸಿದರು. ಅದರಂತೆ ಈ ವರ್ಷ ಈ ದಿನ (ಏಪ್ರಿಲ್ 26) ಬಸವ ಜಯಂತಿ. ತನ್ನಿಮಿತ್ತ ಬಸವಣ್ಣನವರ ಕೆಲವು ವಚನಗಳ ವಾಚನವನ್ನು ಅರಳಿಬಳಗ ಪ್ರಸ್ತುತಪಡಿಸುತ್ತಿದೆ....
(more…)
View On WordPress
0 notes
ಕಾಯಕಯೋಗಿ ಬಸವಣ್ಣ
ಲಿಂಗಭೇದವನೆಣಿಸದೆ ಹೆಣ್ಣಿಗೆ ಗೌರವ ತಂದುಕೊಟ್ಟು, ಸಮಾನತೆಯನ್ನು ಸಾರಿದ ಜಗದ್ಗುರು ಬಸವಣ್ಣ ! -ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಓದಿ…
ನಾಡಿನ ಜನತೆಯ ಕಣ್ಣನು
ತೆರೆಸಿದ ಕಾಯಕಯೋಗಿ ಬಸವಣ್ಣ !
ಕಂದಾಚಾರದಿ ಮುಳುಗಿದ
ಜನರಿಗೆ ಬುದ್ಧಿ ಹೇಳಿದ ದೊಡ್ಡಣ್ಣ !!
ಮೇಲು-ಕೀಳು ಭೇದವ ಎಣಿಸದೆ
ಎಲ್ಲರೂ ಸಮಾನರೆಂದು ಅಪ್ಪಿದ ಬಸವಣ್ಣ !
ಅಂಧಕಾರದಿ ಕುರುಡಾಗಿರುವ ಜಗಕೆ
ಜ್ಞಾನದ ಜ್ಯೋತಿಯ ನೀಡಿದ ದೊಡ್ಡಣ್ಣ…
View On WordPress
0 notes
ಸ್ವಯಂ ಪ್ರೇರಿತ ರಕ್ತದಾನ ಶಿಬಿರ!
ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಭಾರತೀಯ ಜನತಾ ಪಾರ್ಟಿ ನೆಲಮಂಗಲ ವಿಧಾನಸಭಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿನವರ ಸಹಯೋಗದೊಂದಿಗೆ ಸ್ವಾತಂತ್ರ ಹೋರಾಟಗಾರರು ಹಾಗೂ ಹುತಾತ್ಮರ ಯೋಧರ ನೆನಪಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ನೆ.ಲ ನರೇಂದ್ರ ಬಾಬು ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ನಂತರ ಮಾಧ್ಯಮ ಜೊತೆ ಮಾತನಾಡಿದ ತಾಲೂಕ ಅಧ್ಯಕ್ಷರು ಹೇಮಂತ್ ಕುಮಾರ್ ಭಾರತೀಯ ಜನತಾ ಪಾರ್ಟಿ ವತಿಯಿಂದ ಕಳೆದ ಹತ್ತು ವರ್ಷಗಳಿಂದ ನಾವು ಸತತವಾಗಿ ರಕ್ತದಾನವನ್ನು ಶಿಬಿರವನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ ಇಂದು 11 ವರ್ಷದ ರಕ್ತದಾನ ಶಿಬಿರ ವಾಗಿದೆ ಈ ರಕ್ತದಾನ ಶಿಬಿರಕ್ಕೆ ಸುಮಾರು 100ರಿಂದ 150 ಜನರು ರಕ್ತದಾನವನ್ನು ಮಾಡಿದ್ದಾರೆ ಸಂಜೆಯೊಳಗೆ 500ರಿಂದ600 ಜನರು ರಕ್ತದಾನವನ್ನು ಮಾಡುತ್ತಾರೆ ನೆಲಮಂಗಲದಲ್ಲಿ 9ನೇ ಕಾರ್ಯಕ್ರಮ ಇದು.
ಈ ಸಂದರ್ಭದಲ್ಲಿ: ಹೊಂಬಯ್ಯ
ಭವಾನಿ ಶಂಕರ್ ಗ್ರೂಪ್
ಮಾಲೀಕರಾದ ಮಂಜುನಾಥ್, NDA ಅಧ್ಯಕ್ಷರಾದ ಮಲ್ಲಣ್ಣ, ತಾಲೂಕ್ ಅಧ್ಯಕ್ಷರಾದ ಹೇಮಂತ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಜಗದೀಶ್ ಚೌದ್ರಿ, ರವಿ ಸುಬ್ರಮಣಿ,ಬೃಂಗೇಶ್, ಪುನೀತ್, ರುದ್ರೇಶ್ ಮತ್ತು ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು...
Read the full article
1 note
·
View note
ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ : ಒಂದು ಅನುಭಾವ ಸಂಭಾಷಣೆ
ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಶರಣರು ಆಕೆಯನ್ನು ಎದುರುಗೊಂಡ ರೀತಿ ಮತ್ತು ನಡೆಸಿದ ಸಂಭಾಷಣೆ ಹೀಗಿದೆ....
(more…)
View On WordPress
0 notes
*ನಾಡಪ್ರಭು ಕೆಂಪೇಗೌಡರ ಹಾಗು ಮದಕರಿ ನಾಯಕರ* ಭಾವಚಿತ್ರದ ನಡುವೆ *ಹಲವು ಸಾಮ್ಯತೆ ಇದ್ದು* ಹಲವು ಬಾರಿ ಹಲವರು ತಪ್ಪಾಗಿ ಮದಕರಿ ನಾಯಕರ ಚಿತ್ರವನ್ನು ಕೆಂಪೇಗೌಡರ ಜಾಗದಲ್ಲಿ ಉಪಯೋಗಿಸಿದ ಇತಿಹಾಸ ಇದೆ ಅಂತಹ ತಪ್ಪು ಮರುಕಳಿಸುವುದು ಬೇಡ ಎಂಬ ಸದುದ್ದೇಶವಷ್ಟೆ...
ಚಿತ್ರ 1 ಮದಕರಿ ನಾಯಕ ಹಾಗು ಕೆಂಪೇಗೌಡರ ನಡುವಿನ ಚಿತ್ರ ವ್ಯತ್ಯಾಸ
ಚಿತ್ರ 2 ನೀವು ಬಳಸಬೇಕಾದ ಕೆಂಪೇಗೌಡರ ಚಿತ್ರ..
ನಮಸ್ಕಾರಗಳೊಂದಿಗೆ🙏
*ಸತೀಶ್ ಗೌಡ...*
[23/6 10:43 ಅಪರಾ Rotary Jaynagar distributed "FOOD PACKETS including Veg Pulav, laddu and banana to the residents of Jaynagar slum on 13th June Sunday. It was truly a sense of satisfaction to see the eyes of happiness among the crowd after receiving the food🤗🤗🤗
[24/6 6:02 ಅಪರಾಹ್ನ] +91 99864 03488: ರಾಜ್ಯದ ಉತ್ತರ ಭಾಗದಲ್ಲಿ *"ಕಾರ ಹುಣ್ಣಿಮೆ"* ಮಹೋತ್ಸವ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿದೆ.
ಒಂದೇ ಪದಗಳಲ್ಲಿ ಹೇಳುವುದೇ ಆದರೆ *ಒಕ್ಕಲುತನದಲ್ಲಿ ನಮ್ಮ ಜತೆಗೂಡಿದ ನಮ್ಮೊಡನೆ ದುಡಿದು ದಣಿದ ರಾಸುಗಳಿಗೆ ಕೃತಜ್ಞಾತಾಪೂರ್ವಕ ಸಂಬ್ರಮವೆ ಈ ಕಾರ ಹುಣ್ಣಿಮೆ.*
ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ಎನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆಯು ಹಬ್ಬಗಳನ್ನು ಸಾಲು ಸಾಲಾಗಿ ಕರೆ ತರುವ ಹೆಬ್ಬಾಗಿಲಿದ್ದಂತೆ. ಕಾರ ಹುಣ್ಣುಮೆಯ ಆಗಮನಕ್ಕಾಗಿ ಕಾಯುತ್ತಿರುವ ನಾಗರ ಪಂಚಮಿ ‘ಬಂದ್ಯಾ ಬಂಗಾರದ ಕರಣಿ, ಕಾರುಣ್ಣಿ’ ಎಂದಿತಂತೆ ಅಕ್ಕರೆಯಿಂದ. ಅದಕ್ಕುತ್ತರವಾಗಿ ಕಾರ ಹುಣ್ಣಿಮೆ ‘ಬಂದೀನಿ ತಗೊಳೋ ನಿನ್ನ ಹಿಟ್ಟಿನ ಮೂಳನ ಹಡ್ಡಿ’ ಎಂದಿತಂತೆ ವ್ಯಂಗ್ಯವಾಗಿ.
ಹುಣ್ಣಿಮೆಗಿಂತೂ ಮೊದಲ ದಿನಕ್ಕೆ *‘ಹೊನ್ನ ಹುಗ್ಗಿ’* ಎಂದು ಕರೆಯುತ್ತಾರೆ. ಅಂದು ಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನೇ ಮನೆದೇವರಿಗೆ ಸಂಜೆ ನೈವೇದ್ಯ ಮಾಡುತ್ತಾರಲ್ಲದೇ ಪೂಜೆಗೊಂಡ ಜಾನುವಾರುಗಳಿಗೂ ತಿನಿಸುತ್ತಾರೆ. ಕಾರ ಹುಣ್ಣಿಮೆಯ ದಿನ ಎಲ್ಲ ಜಾನುವಾರಗಳಿಗೂ ಜೋಳದ ಅಂಬಲಿ, ಗಾನದೆಣ್ಣೆ, ಅರಿಷಿಣ ಪುಡಿ (ಕೆಲವರು ಕೋಳಿಯ ತತ್ತಿಯನ್ನು ಹಾಕುತ್ತಾರೆ) ಸೇರಿಸಿ ಗೊಟ್ಟದ ಮೂಲಕ ಗಂಟಲಕ್ಕೆ ಸುರುವುತ್ತಾರೆ. ಮಳೆಗಾಲದ ತಂಪಿನ ವಾತಾವರಣಕ್ಕೆ ಜಾನುವಾರುಗಳೂ ಹೊಂದಿಕೊಳ್ಳಲು ಈ ವ್ಯವಸ್ಥೆ ಎನ್ನುತ್ತಾರೆ.
*ಕಾರ ಹುಣ್ಣಿಮೆ* ಅಪ್ಪಟ ರೈತರ ಹುಣ್ಣಿಮೆ. ಈ ಹುಣ್ಣಿಮೆಯ ದಿನ ರೈತರು ತಮ್ಮ ಮಳೆ ಬೆಳೆಯನ್ನು ತಿಳಿಯುವ ಕಾರ್ಣಿಕದ ಹಬ್ಬವೆಂಬಂತೆ ಆಚರಿಸುತ್ತಾರೆ. ತಮ್ಮ ಒಡನಾಡಿಗಳಾದ ಎತ್ತುಗಳಿಗೆ ಸಿಂಗಾರ ಮಾಡಿ ಓಡಿಸುವ ಮೂಲಕ ಕಾರಹುಣ್ಣಿಮೆ ಕರಿ ಹರಿಯುತ್ತಾರೆ.
ಮುಂಗಾರು ಮಳೆ ಆರಂಭವಾದ ನಂತರ ಬರುವ ಕಾರ ಹುಣ್ಣಿಮೆಯನ್ನು ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಹಬ್ಬವೆಂಬಂತೆ ಆಚರಿಸುತ್ತಾರೆ. ಕಾರ ಹುಣ್ಣಿಮೆಯ ದಿನ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಪೂಜಿಸುತ್ತಾರೆ.
ಎತ್ತು ಹುಸುಗಳನ್ನು ತೊಳೆದು ಸಿಂಗರಿಸಿ, ಕೊಂಬುಗಳನ್ನು ಕೆತ್ತಿಸಿದ ರೈತರು ಎತ್ತುಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಿ ಸಂಜೆ ವೇಳೆಗೆ ತಮ್ಮ ಎತ್ತುಗಳ ಸಾಮಾರ್ಥ್ಯವನ್ನು ಅಳೆಯಲು ಓಡಿಸುತ್ತಾರೆ. ಈ ವೇಳೆ ಹಲವರು ಓಡುವ ಎತ್ತುಗಳನ್ನ ಹಿಡಿದು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಕರಿ ಹರಿಯುವುದು ಎಂದು ಕರೆಯುತ್ತಾರೆ.
ಗ್ರಾಮದ ಅಗಸಿಯ (ಚಾವಡಿ) ಮುಂದೆ ಬೇವಿನ ತಪ್ಪಲು, ನೇರಳೆ ಹಣ್ಣು, ಕೊಬ್ಬರಿಯನ್ನು ಪೋಣಿಸಿದ ಸರ ತಯಾರಿಸಿದ್ದು, ಅಗಸಿಗೆ ಅಡ್ಡವಾಗಿ ಈ ಸರವನ್ನು ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳನ್ನು ಓಡಿಸುತ್ತಾ ಕೊನೆಗೆ ಅಗಸಿಯೊಳಗಾಗಿ ಓಡುವಂತೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೆಂದು ಬಣ್ಣದ ಎತ್ತು ಮೊದಲು ಬಂದರೆ ಕೆಂಪು ಕಾಳುಗಳು, ಬಿಳಿ ಎತ್ತು ಮೊದಲು ಬಂದರೆ ಬಿಳಿ ಧಾನ್ಯ ಉತ್ತಮವಾಗಿ ಬೆಳೆಯುತ್ತದೆ ಎಂದು ನಂಬಿಕೆಯಿದೆ. ಈ ವೇಳೆ ರಾಸುಗಳ ಓಟ ರೋಮಾಂಚನಕಾರಿಯಾಗಿರುತ್ತದೆ.
ರೈತ ಮತ್ತು ಜಾನುವಾರಗಳ ನಡುವಿನ ಬಾಂಧವ್ಯ ತಂದೆ ಮಕ್ಕಳ ಹಾಗೆ ಇರುತ್ತದೆ,ಮಕ್ಕಳ ಹುಟ್ಟು ಹಬ್ಬದ ಸಂಬ್ರಮದಂತೆ ಕೃಷಿಕರು ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುತ್ತಾರೆ.
ಕವಿ ದರಾ ಬೇಂದ್ರೆ ಹೇಳುವಂತೆ
*ಹರಗೋಣ ಬಾ ಹೊಲ ಹೊಸದಾಗಿ
ಬಿದ್ದೈತೆ ಹ್ಯಾಗೋ ಕಾಲ್ ಕಸವಾಗಿ*
*ನಂಬಿಗಿಲೆ ದುಡೀತಾನ ಬಸವಣ್ಣ*
*ನಂಬಿಗ್ಯಾಗೈತೆ ಅವನ ಕಸುವಣ್ಣಾ*
*ಕಸುವೀಲೆ ಬೆಳೆಸೋಣ ಎತ್ತುಗೋಳು*
*ಎತ್ತಲ್ಲಾ ಅವು ನಮ್ಮ ಮುತ್ತುಗೋಳು*
ಎಲ್ಲಾ ಒಕ್ಕಲುತನದ ಬಂಧುಗಳಿಗೆ ಕಾರ ಹುಣ್ಣಿಮೆಯ ಶುಭಾಶಯಗಳು..
(ಸಂಗ್ರಹ ಬರಹ)
*ಸತೀಶ್ ಗೌಡ*✍8*
*ಅಧ್ಯಕ್ಷರು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್.*
*ನಿರ್ದೇಶಕ ಸ್ಥಾನದ ಅಭ್ಯರ್ಥಿ ರಾಜ್ಯ ಒಕ್ಕಲಿಗರ ಸಂಘ.*
*(ಮೈಸೂರು ಚಾಮರಾಜನಗರ)*
[26/6 6:54 ಪೂರ್ವಾಹ್ನ] Kempegowda Yuvashakti Vedike President: ಬೆಂಗಳೂರು ಮಹಾನಗರದ ಸೃಷ್ಟಿಕರ್ತ ಸರ್ವಧರ್ಮ ಸಮನಾಗಿ ಕಂಡ ಯುಗಪುರುಷ ಅನ್ನದಾತನ ನೆರಳಾದ ಸಾವಿರಾರು ಕೆರೆ ನಿರ್ಮಾಣ ಮಾಡಿದ ಕೆಚ್ಚೆದೆಯ ಕರುನಾಡ ಕರುಣಾಮಯಿ ಒಕ್ಕಲಿಗ ಕುಲ ತಿಲಕ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿ ಜೂನ್ 27ರಂದು ಪ್ರತಿ ಮನೆಗಳಲ್ಲಿ ವಿಜೃಂಭಿಸಲಿ.
ಜೈ ಕೆಂಪೇಗೌಡ ಜೈ ಒಕ್ಕಲಿಗ.
✍️ ನಿಮ್ಮ ಪ್ರೀತಿಯ ಕೆಂಪೇಗೌಡ ಯುವಶಕ್ತಿ ಅನಿಲ್ ಗೌಡ್ರು.
0 notes
ವಚನದ ಅರ್ಥ ತಿಳಿಯಿರಣ್ಣ (ಭಾಗ- ೩)
ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ…ವಚನದ ಅರ್ಥವನ್ನು ವಚನಶ್ರೀ ಶಿವಕುಮಾರ ಪಾಟೀಲ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ….
ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ.
————–
ಬಸವಣ್ಣ
ಮೊದಲು ನಮ್ಮನ್ನು ನಾವು ಅರಿಯಬೇಕು, ಮನೆಯನ್ನು ಮನೆಗಳಲ್ಲಿ ಇರುವ ಮನಗಳನ್ನು ಗೆಲ್ಲಬೇಕು. ನಮ್ಮ ವೈಯಕ್ತಿಕ ಗುರಿಯನ್ನು…
View On WordPress
0 notes
ಕುವೆಂಪು ಅವರನ್ನು ಪ್ರವಾದಿ ಎನ್ನುವ ಭಾವುಕ ತವಕ
ತಂತಾನೇ ಅಸಾಧಾರಣವಾದ ಒಂದು ವ್ಯಕ್ತಿತ್ವವನ್ನು ದೈವತ್ವಕ್ಕೆ ಏರಿಸುವುದು ಎಂದರೆ, ಆ ವ್ಯಕ್ತಿತ್ವಕ್ಕಿರುವ ಜಂಗಮಸ್ವರೂಪಿ ಆಯಾಮಗಳನ್ನು ಮುಗಿಸಿಬಿಟ್ಟಂತೆ. ದೈವತ್ವಕ್ಕೆ ಏರಿಸಿದ ತಕ್ಷಣ ಏನಾಗುತ್ತದೆ ಎಂದರೆ, ಅದರ ಸಂಪೂರ್ಣ ನಿರ್ವಹಣೆಯನ್ನು ನಾವು ನಮ್ಮ ಕೈಗೆ ತೆಗೆದುಕೊಳ್ಳುತ್ತೇವೆ. ಬುದ್ಧ ನೀರಿನ ವ್ಯಾಜ್ಯದ ಕಾರಣದಿಂದ ತಲೆದೋರಿನ ಯುದ್ಧ ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಊರು ಬಿಡಬೇಕಾಯಿತು ಅನ್ನುವುದನ್ನು ಬದಿಗೆ ಸರಿಸಿ ಆತನ ಸುತ್ತ ರಮ್ಯವಾದ ಪುರಾಣವನ್ನು ಕಟ್ಟುತ್ತೇವೆ. ಬಸವಣ್ಣನನ್ನು ಕ್ಷಾತ್ರ ತೇಜಸ್ಸಿನವನನ್ನಾಗಿ ಬಿಂಬಿಸುವುದಕ್ಕೆ ಹೊರಡುತ್ತೇವೆ. ಹೀಗೆ ಬುದ್ಧನನ್ನು ಅವನ ಚಾರಿತ್ರಿಕ ಸಂದರ್ಭದಿಂದ ದೂರಮಾಡಿ ಆ ವ್ಯಕ್ತಿತ್ವಕ್ಕಿರುವ ಬೇರೆಯದೇ ಘನತೆಯನ್ನು ಕಳೆಯುವ, ಅಳಿಸಿಹಾಕುವ ಯತ್ನ ನಡೆಯುತ್ತದೆ. ಅನುಭವ ಮಂಟಪದ ಬಸವಣ್ಣ ಜನಮಾನಸದಲ್ಲಿ ಇಲ್ಲವಾಗುವ ಅತಿ ದೊಡ್ಡ ಸಾಂಸ್ಕೃತಿಕ ದುರಂತಕ್ಕೆ ದಾರಿ ಮಾಡುತ್ತೇವೆ.
ಅವತಾರವಾಗಿಸುವ ಇಂಥ ಯತ್ನಗಳ ಹಿಂದೆ ಇರುವ ಎರಡು ಮುಖ್ಯ ಕಾರಣಗಳೆಂದರೆ ಧಾರ್ಮಿಕತೆಯನ್ನು ಸೀಮಿತ ನೆಲೆಯಲ್ಲಿ ಅರ್ಥೈಸಿ ಅದನ್ನೇ ನಿಜವೆಂದು ನಂಬಿಸುವ ಉದ್ದೇಶದ ಒತ್ತಾಯ ಮತ್ತು ಭಾವುಕತೆ. ಬುದ್ಧನಾಗಲೀ ಬಸವಣ್ಣನವರಾಗಲೀ ಧರ್ಮವನ್ನು ಸ್ಥಾಪಿಸಹೊರಟವರಲ್ಲ. ಬುದ್ಧ ದುಃಖದಿಂದ ಬದುಕನ್ನು ಮುಕ್ತಗೊಳಿಸುವ ಸತ್ಯ ಯಾವುದು ಎಂದು ಹುಡುಕುತ್ತ ಹೊರಟವನು. ಬಸವಣ್ಣನವರು ಒಂದು ಸಾಂಕೇತಿಕ ದೈವಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಸಮಾಜದಲ್ಲಿ ಸುಧಾರಣೆಯನ್ನು ಬಯಸಿದ್ದವರು. ಆದರೆ, ಅನಂತರದ ಕಾಲಘಟ್ಟ ಅವರಿಬ್ಬರನ್ನೂ ಧರ್ಮಕ್ಕೆ ಕಟ್ಟಿಹಾಕಿತು. ಇನ್ನೊಂದೆಡೆಯಿಂದ ಬುದ್ಧನನ್ನೂ ಬ���ವನನ್ನೂ ಭಾವುಕತೆಯ ಭಾಗವಾಗಿಸುವ ರಾಜಕಾರಣವೊಂದು ಕೆಲಸ ಮಾಡುವುದಕ್ಕೆ ಶುರು ಮಾಡಿತು.
ಕನ್ನಡ ಮಾತ್ರವಲ್ಲ, ಭಾರತೀಯ ಸಾಹಿತ್ಯ ಚರಿತ್ರೆಯ ಮೇರು ವ್ಯಕ್ತಿತ್ವವಾದ ಕುವೆಂಪು ಅವರ ವಿಷಯದಲ್ಲಿಯೂ ಇಂಥದೇ ಸಮಸ್ಯೆಗಳು ತಲೆದೋರುತ್ತಿರುತ್ತವೆ. ಪ್ರವಾದಿ ಎಂದು ಕುವೆಂಪು ಅವರನ್ನು ಭಾವಿಸುವ ಮೂಲಕ, ಯಾವ ಬಿಕ್ಕಟ್ಟಿನ ಬಗ್ಗೆ ಎಚ್ಚರವಿರಬೇಕು ಎಂದು ಅವರು ಕರೆ ಕೊಟ್ಟಿದ್ದರೊ ಅದೇ ಬಿಕ್ಕಟ್ಟಿನೊಳಕ್ಕೆ ನಮ್ಮನ್ನು ನಾವು ತಳ್ಳಿಕೊಳ್ಳುವ ತಪ್ಪನ್ನು ಅನೇಕರು ಮಾಡುತ್ತಲೇ ಬಂದಿದ್ದಾರೆ. ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ಪೂಜ್ಯ ಭಾವದಿಂದ ನೋಡುವ ಬಗೆಯೇ ದೋಷಪೂರಿತ. ಭಾವುಕತೆಯ ಮಸುಕಿನಲ್ಲಿ ಚರಿತ್ರೆಯ ಒಡಲಾಳದ ಸತ್ಯಕ್ಕೆ ವಿಮುಖರಾಗುವುದು ಮತ್ತು ಉನ್ಮಾದಿ ಭಾವದಿಂದ ಮೈಮರೆಯುವುದು ಮತ್ತೆ ಮತ್ತೆ ಜರುಗುತ್ತಿರುತ್ತದೆ.
ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ ಎಂದವರು ಕುವೆಂಪು. ನಿರಂಕುಶಮತಿಗಳಾಗಿ ಎಂದವರು ಅವರು. ಜಡ್ಡುಗಟ್ಟಿದ ವ್ಯವಸ್ಥೆಯನ್ನು ವಿರೋಧಿಸಿದ ಸೌಮ್ಯ ಸ್ವರೂಪಿಯೊಬ್ಬನ ಕಾಣ್ಕೆಗಳಂತೆ ನಮ್ಮೆದುರು ಅವರ ಕೃತಿಗಳಿವೆ. ಕುವೆಂಪು ಅವರನ್ನು ಪ್ರವಾದಿ ಎಂದುಬಿಡುವ ಭಾವುಕತೆ, ಅವರ ಅಂಥ ಕೃತಿಗಳನ್ನು ಒಳಗೊಳ್ಳದೆ ಪೂಜೆಗಿಟ್ಟಂತಾಗುವ ಥರದ ಅಪಾಯವೂ ಹೌದು.
ಈಗಾಗಲೇ ಇಂಥ ಅಪಾಯದ ಹಲವು ನೆಲೆಗಳನ್ನು ನಾವು ಗ್ರಹಿಸಬಹುದು. ಇಡೀ ಭಾರತೀಯ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲೇ ಮುಖ್ಯ ಹೆಸರುಗಳಲ್ಲೊಂದಾಧ ಕುವೆಂಪು ಅವರು ತಮ್ಮ ಹುಟ್ಟೂರು ಮಲೆನಾಡಿನ ಮಾನಸದಿಂದಲೂ ಮರೆಯಾದಂತಿರುವುದಕ್ಕೆ ವಿವರಣೆ ಬೇಕಿಲ್ಲ. ಕೆಲವು ಮೂರ್ತ ರೂಪದ ಚಿತ್ರಗಳನ್ನು ಬಿಟ್ಟರೆ ಮಲೆನಾಡಿಗರ ಅಂತಃಕರಣದೊಳಗೆ ಕವಿಶೈಲವಿದ್ದಂತಿಲ್ಲ. ಹಲವು ಹೋರಾಟಗಳು ರೂಪುಗೊಂಡಿದ್ದ ಇಡೀ ಮಲೆನಾಡಿನ ವಾತಾವರಣವನ್ನು ಇವತ್ತು ಯಾವುದು ಆಳುತ್ತಿದೆ, ಅಲ್ಲಿನ ರಾಜಕೀಯ ಏನು ಎಂಬುದನ್ನು ಗಮನಿಸಿದರೂ ಇದು ಗೊತ್ತಾಗುತ್ತದೆ.
ಧಾರ್ಮಿಕತೆ ಮತ್ತು ರಾಜಕಾರಣದ ಮುಖಾಂತರ ಬಿಂಬಿತವಾಗುವ ಚಹರೆಯನ್ನು ನೆನಪಿಟ್ಟುಕೊಳ್ಳುವ ಸನ್ನಿವೇಶ ಇವತ್ತಿನದು. ಇಂಥ ಸನ್ನಿವೇಶದಲ್ಲಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ನಾಯಕನಂತಿರುವ ಕುವೆಂಪು ಅವರು ಅಪರಿಚಿತ ಅಥವಾ ಅಪ್ರಸ್ತುತವಾಗುತ್ತಿರುವುದು ಕಟು ಸತ್ಯವಾದರೂ ಅನಿರೀಕ್ಷಿತವೇನೂ ಅಲ್ಲ. ಯಾಕೆಂದರೆ, ಚರಿತ್ರೆಯನ್ನು ಕಟ್ಟಿದವರ ಕಥನಗಳು, ಚರಿತ್ರೆಯನ್ನು ತಮಗೆ ಅನುಕೂಲಸಿಂಧುವಾಗಿ ಬದಲಿಸಿಕೊಳ್ಳುವವರಿಗೆ ಬೇಡವಾಗಿವೆ.
ಆದರೆ, ಇಂಥ ಆತಂಕದ ಸನ್ನಿವೇಶಗಳೇ ಕುವೆಂಪು ಅವರಿಗೆ ಪ್ರವಾದಿತನವನ್ನು ಹೊದೆಸಿ ನೋಡುವಂತೆ ಮಾಡುವ ಅಪಾಯವನ್ನೂ ತಂದೊಡ್ಡಿವೆ. ಸಾಂಸ್ಕೃತಿಕ ಅಸ್ಮಿತೆಯ ಉಳಿವಿನ ಕುರಿತಾದ ಅಭದ್ರತೆಯ ಭಾವನೆಯಿಂದಾಗಿ ಭಾವುಕ ತವಕಗಳು ಒಡಮೂಡಬಹುದಾದ ಬಗೆ ಇದು. ಆದರೆ ಇಂಥ ತವಕಗಳು ನಮ್ಮ ತಲ್ಲಣಗಳನ್ನು ಇನ್ನಷ್ಟಾಗಿಸಬಲ್ಲವೇ ಹೊರತು, ಇವತ್ತಿನ ಸಾಂಸ್ಕೃತಿಕ ಬಿಕ್ಕಟ್ಟಿಗೆ ಪರಿಹಾರವಾಗಲಾರವು. ಎಂಥ ಭಾವುಕತೆಯಲ್ಲೂ ಈ ಎಚ್ಚರವನ್ನು ನಾವು ಕಾಯ್ದುಕೊಳ್ಳುವುದು, ಕುವೆಂಪು ಅವರನ್ನು ಕನ್ನಡದ ಅಸ್ಮಿತೆಯಾಗಿ, ಎಲ್ಲ ರಾಜಕಾರಣಗಳಿಂದ ದೂರವಿರಿಸಿ ಕಾಣುವುದಕ್ಕೆ ಅಗತ್ಯ. ಕುವೆಂಪು ಅವರು ಒಂದೆಡೆ ಹೇಳಿದ್ದರು: ಕಾವ್ಯವನ್ನೇ ಬದುಕುತ್ತಿದ್ದೇನೆ, ಬರೆಯುತ್ತಿಲ್ಲ ಎಂದು. ಹಾಗೆಯೇ ನಾವೂ ಅವರ ಕಾಣ್ಕೆಗಳನ್ನು ಬದುಕಬೇಕಾಗಿದೆ.
0 notes
ಕರ್ನಾಟಕ ಬಜೆಟ್ 2021: 500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ
ಬೆಂಗಳೂರು, ಮಾ.8: ಬಸವಕಲ್ಯಾಣದಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಬಜೆಟ್ನಲ್ಲಿ 200 ಕೋಟಿ ಬಿಡುಗಡೆ ಮಾಡಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ಅಡಿ ವಿವಿಧ ಕಾಮಗಾರಿಗಳಿಗಾಗಿ 50 ಕೋಟಿ, ಬಸವಣ್ಣ ಅವರ ಜನ್ಮ ಸ್ಥಳ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮವನ್ನು 5 ಕೋಟಿ ರೂ.ನಲ್ಲಿ ಅಭಿವೃದ್ಧಿಪಡಿಸುವುದು,…
View On WordPress
0 notes